Slide
Slide
Slide
previous arrow
next arrow

ಬಡವರವನ್ನು ತಾತ್ಸಾರ ಮಾಡುವ ಮೂಲಕ ರಾಜ್ಯ ಸರ್ಕಾರ ಕ್ರೈಂ ಮಾಡಿದೆ; ಅನಂತಮೂರ್ತಿ ಆಕ್ರೋಶ

300x250 AD

ಶಿರಸಿ: ನಗರಸಭೆ ವ್ಯಾಪ್ತಿಯಲ್ಲಿನ ಮರಾಠಿಕೊಪ್ಪದ ಜೋಡುಕಟ್ಟೆ ಸಮೀಪದಲ್ಲಿ ಭಾನುವಾರ ಮನೆ ಕುಸಿತದ ಪ್ರದೇಶಕ್ಕೆ ಸೋಮವಾರ ಬೆಳ್ಳಂಬೆಳಿಗ್ಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಹಣಕಾಸಿನ ಸಹಾಯವನ್ನು ಮಾಡಿದರು.

ಈ ವೇಳೆ ಮಾತನಾಡಿದ ಅವರು, ಇದು ರಾಜ್ಯ ಸರ್ಕಾರದ ನೇರ ಹೊಣೆಗಾರಿಕೆಯಾಗಿದ್ದು, ಇದು ಕೇವಲ ಸರದಕಾರದ ತಪ್ಪಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಕ್ರೈಂ ಮಾಡಿದಂತಾಗಿದೆ. ಬಡ ಜನರ ವಿಷಯದಲ್ಲಿ ತಾತ್ಸಾರ ಸರ್ವಥಾ ಒಪ್ಪತಕ್ಕದ್ದಲ್ಲ. ಈ ಕೂಡಲೇ ರಾಜ್ಯ ಸರಕಾರ ಜನರಿಗೆ ತುರ್ತು ವ್ಯವಸ್ಥೆ ಮಾಡಬೇಕು. ನಾವ್ಯಾರು ಸರ್ಕಾರದ ಬಳಿ ಭಿಕ್ಷೆ ಕೇಳುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಈ ಕೂಡಲೇ ಸ್ಥಳೀಯ ಶಾಸಕರು, ಆಡಳಿತ ವ್ಯವಸ್ಥೆ ತುರ್ತಾಗಿ ಸ್ಪಂದಿಸಬೇಕಿದೆ ಎಂದು ಅವರು ಆಗ್ರಹಿಸಿದರು. ಸಂತ್ರಸ್ತ ಕುಟುಂಬದ ಜೊತೆಗೆ ಈ ಭಾಗದ ಎಲ್ಲ ಸಾರ್ವಜನಿಕರ ಜೊತೆಗೆ ಸದಾ ಬೆನ್ನಿಗಿರುವುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನಂದನ್ ಸಾಗರ್, ಗಣೇಶ್ ರೇವಣಕರ್, ಅಶೋಕ್ ಶೆಟ್ಟಿ, ಸ್ಥಳೀಯರಾದ ಮಂಜುನಾಥ್ ಶೇಟ್, ಮಧು ನಾಯ್ಕ, ನಾಗರಾಜ ಆಚಾರಿ, ವಿಶ್ವ ನಾಯ್ಕ್, ಆನಂದ ಗೌಳಿ ಇನ್ನಿತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top